Skip to main content
ವಿಡಿಯೋ
general

ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಪ್ರತಿಷ್ಠಿತ ʻಅಶೋಕ ಚಕ್ರʼಕ್ಕೆ ಭಾಜನರಾದ ಬಾಹ್ಯಾಕಾಶ ತಾರೆ ಶುಭಾಂಶು ಶುಕ್ಲಾ

By Shravanthi R
ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಪ್ರತಿಷ್ಠಿತ ʻಅಶೋಕ ಚಕ್ರʼಕ್ಕೆ ಭಾಜನರಾದ ಬಾಹ್ಯಾಕಾಶ ತಾರೆ ಶುಭಾಂಶು ಶುಕ್ಲಾ

ದೇಶದ ಐತಿಹಾಸಿಕ 77 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ, ಭಾರತದ ಗಗನಯಾತ್ರಿ ಹಾಗೂ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಆದ ಶುಭಾಂಶು ಶುಕ್ಲಾ ಅವರಿಗೆ ಶಾಂತಿ-ಶೌರ್ಯವನ್ನು ಸಾರುವ ಅತ್ಯುನ್ನತ ಪ್ರಶಸ್ತಿಯಾದ ʻಅಶೋಕ ಚಕ್ರʼ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ.

ದೇಶದ ಐತಿಹಾಸಿಕ 77 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ, ಭಾರತದ ಗಗನಯಾತ್ರಿ ಹಾಗೂ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಆದ ಶುಭಾಂಶು ಶುಕ್ಲಾ ಅವರಿಗೆ ಶಾಂತಿ-ಶೌರ್ಯವನ್ನು ಸಾರುವ ಪ್ರಶಸ್ತಿಯಾದ ಅತ್ಯುನ್ನತ ʻಅಶೋಕ ಚಕ್ರʼ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ. 

ಪ್ರಶಸ್ತಿಯನ್ನು ಸ್ವೀಕರಿಸಿರುವ ಅವರು, ಇದು ಭಾರತದ ಜನರು ಸಾಮೂಹಿಕವಾಗಿ ನೀಡಿದ ಆಶೀರ್ವಾದವೆಂದು ಬಣ್ಣಿಸಿದ್ದಾರೆ. ಬಾಹ್ಯಾಕಾಶ ಹಾಗೂ ವಾಯುಪಡೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಅವರು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Sonos Era 100 | Smart Speaker with WiFi, Bluetooth, Amazon Alexa - Black

ನನಗೆ ನೀಡಲಾಗಿರುವ ಗೌರವಕ್ಕೆ ಅಪಾರ ಹೆಮ್ಮೆ ಹಾಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಗಗನಯಾನಿಯಾಗಿ ಪ್ರಯಾಣವನ್ನು ಪ್ರಾರಂಭಿಸಿದ್ದು, ನಾನು ಪ್ರತಿಯೊಬ್ಬ ಭಾರತೀಯನ ಪ್ರತಿನಿಧಿಯ ಹಾಗೆ ಮಾಡಿದೆ. ಇಂದು ನಾನು ಈ ಮನ್ನಣೆಯನ್ನು ಪಡೆಯುತ್ತಿದ್ದು, ಇದು ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ತಿಳಿದು ನಿಜಕ್ಕೂ ನಾನು ವಿನಮ್ರನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆ - ಮಹಿಳಾ ಮೀಸಲಾತಿ ಬಗ್ಗೆ ಆಕ್ಷೇಪ; ಮತದಾರರ ಪಟ್ಟಿ ಪರಿಶೀಲನೆ ಚುರುಕು!?