ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ಅಧಿನಿಯಮ (Maharashtra Freedom of Religion Bill) 2026 ಅನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಂಡಿಸಿದರು. ವಿಶೇಷವೆಂದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯೂ ಈ ಮಸೂದೆಗೆ ಬೆಂಬಲ ನೀಡಿದೆ.
ಇತರ ರಾಜ್ಯಗಳ ಹಾದಿಯಲ್ಲಿ
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇಂತಹ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ಮಹಾರಾಷ್ಟ್ರವಲ್ಲ ಎಂದು ತಿಳಿಸಿದರು. ಈಗಾಗಲೇ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳು ಮತಾಂತರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ ಎಂದು ಅವರು ಉಲ್ಲೇಖಿಸಿದರು.
ಉದ್ದೇಶ
ಈ ಮಸೂದೆಯು ಪ್ರಮುಖವಾಗಿ ವಂಚನೆ, ಆಮಿಷ ಅಥವಾ ಓಡಿಸಿಕೊಂಡು ಹೋಗುವ ಮೂಲಕ ನಡೆಯುವ ಮತಾಂತರಗಳನ್ನು ತಡೆಯುವತ್ತ ಗಮನಹರಿಸುತ್ತದೆ. ವಿಶೇಷವಾಗಿ ವಿವಾಹದ ನಂತರ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರಿಗೆ ರಕ್ಷಣೆ ನೀಡುವುದು ಮತ್ತು ಬಲವಂತದ ಅಥವಾ ಆಮಿಷದ ವಿವಾಹಗಳಿಗೆ ಪರಿಹಾರವನ್ನು ಒದಗಿಸುವುದು ಇದರ ಗುರಿಯಾಗಿದೆ.
ಇರಾನ್ ಅಲ್ಲ, ಅಮೆರಿಕವನ್ನೇ ಬೆಚ್ಚಿಬೀಳಿಸಿದ ಯುದ್ಧ
ತಿದ್ದುಪಡಿ
ಪ್ರಸ್ತುತ ಇರುವ ನಿಯಮಗಳಲ್ಲಿನ ಅಸ್ಪಷ್ಟತೆಗಳನ್ನು ಹೊಸ ಮಸೂದೆಯಲ್ಲಿ ಸರಿಪಡಿಸಲಾಗಿದೆ.
ರಾಜಕೀಯ ಬೆಂಬಲ
ಶಿವಸೇನೆಯ ಹಿರಿಯ ನಾಯಕ ಭಾಸ್ಕರ್ ಜಾಧವ್ ಅವರು ಈ ಮಸೂದೆಯನ್ನು ಬೆಂಬಲಿಸಿದ್ದು, ಇದು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.