Skip to main content
ವಿಡಿಯೋ
1/2
general

ಹೊಸ LPG ಮಾರ್ಗಸೂಚಿ ಬಿಡುಗಡೆ: 25 ದಿನಗಳ ನಂತರವೇ ಮುಂದಿನ ಸಿಲಿಂಡರ್ ಬುಕ್ಕಿಂಗ್..!

By Sushmitha R
ಹೊಸ LPG ಮಾರ್ಗಸೂಚಿ ಬಿಡುಗಡೆ: 25 ದಿನಗಳ ನಂತರವೇ ಮುಂದಿನ ಸಿಲಿಂಡರ್ ಬುಕ್ಕಿಂಗ್..!

ದೇಶದಲ್ಲಿ LPG ಸಿಲಿಂಡರ್ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ.

ದೇಶದಲ್ಲಿ LPG ಸಿಲಿಂಡರ್ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಾಗಾಟ ಮತ್ತು ಕಾಳಸಂತೆ ತಡೆಯುವ ಉದ್ದೇಶದಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿವೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರು ಇನ್ನು ಮುಂದೆ ಮಿತಿಯಿಲ್ಲದೆ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ. ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕ್ಕಿಂಗ್‌ಗೆ ಕನಿಷ್ಠ 25 ದಿನಗಳ ಅವಧಿ ಕಾಯಬೇಕು.

ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಲ್ಲಿ ಈ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಬದಲಾವಣೆಯು ಇರಾನ್-ಅಮೆರಿಕಾ ಯುದ್ಧದ ಕಾರಣದಿಂದಾಗಿ ಉಂಟಾದ ಗ್ಲೋಬಲ್ ಸಪ್ಲೈ ತೊಂದರೆಯನ್ನು ಎದುರಿಸುವ ಉದ್ದೇಶದಿಂದ ಬಂದಿದೆ. ಮುಂಚಿತವಾಗಿ ಸಿಲಿಂಡರ್ ಬುಕ್ಕಿಂಗ್ ಅವಧಿ 21 ದಿನಗಳಷ್ಟಿತ್ತು. ZENEME Rhodium Plated Silver Toned White American Diamond Studded Flower Shaped Jewellery Set For Girls and Women

ಈಗ ಅದನ್ನು ಹೆಚ್ಚಿಸಿ ಪಾರದರ್ಶಕ ವಿತರಣೆ ಖಚಿತಪಡಿಸಲಾಗುತ್ತಿದೆ. 5 ಕೆ.ಜಿ ಸಿಲಿಂಡರ್‌ಗೆ 9 ರಿಂದ 15 ದಿನಗಳ ಗ್ಯಾಪ್ ಮತ್ತು 10 ಕೆ.ಜಿ ಸಿಲಿಂಡರ್‌ಗೆ 18 ರಿಂದ 32 ದಿನಗಳ ಗ್ಯಾಪ್ ಅನ್ವಯವಾಗುತ್ತದೆ. ಉಜ್ವಲ ಯೋಜನೆಯ ಲಾಭಾನ್ವಿತರಿಗೆ ಈ ನಿಯಮಗಳು ಕಟ್ಟುನಿಟ್ಟಾಗಿ ಅನ್ವಯಿಸಲಾಗುತ್ತದೆ.

ಈ ಕ್ರಮದಿಂದಾಗಿ ಗ್ರಾಹಕರು ತಮ್ಮ ಬುಕ್ಕಿಂಗ್‌ಗಳನ್ನು ಯೋಜನಾಬದ್ಧವಾಗಿ ಮಾಡಬೇಕಾಗಿದೆ. ಆನ್‌ಲೈನ್ ಬುಕ್ಕಿಂಗ್ ಸಮಯದಲ್ಲಿ ಹೊಸ ಗ್ಯಾಪ್ ಅವಧಿ ಪರಿಶೀಲಿಸಲಾಗುತ್ತದೆ. ಒಟಿಪಿ ಆಧಾರಿತ ವ್ಯವಸ್ಥೆಯನ್ನು ಕೂಡ ಬಲಪಡಿಸಲಾಗಿದೆ. ವಾಹನ ಸವಾರರಿಗೆ ಶಾಕ್: ಏಪ್ರಿಲ್ 1ರಿಂದ ರಾಜ್ಯದ ಹೆದ್ದಾರಿ ಟೋಲ್ ದರ ಏರಿಕೆ! ನಿಮ್ಮ ಜೇಬಿಗೆ ಎಷ್ಟು ಕತ್ತರಿ? ಇಲ್ಲಿದೆ ಪೂರ್ಣ ವಿವರ

ಈ ಬದಲಾವಣೆಗಳು ದೇಶಾದ್ಯಂತ ಎಲ್ಲಾ ಎಲ್‌ಪಿಜಿ ವಿತರಕರಿಗೆ ಅನ್ವಯವಾಗುತ್ತವೆ. ಸರ್ಕಾರವು ರಿಫೈನರಿಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಸೂಚಿಸಿದೆ. ಆದರೂ ತಾತ್ಕಾಲಿಕ ಬಿಕ್ಕಟ್ಟು ನಿಭಾಯಿಸಲು ಈ ನಿಯಂತ್ರಣಗಳು ಅನಿವಾರ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗ್ರಾಹಕರು ತಮ್ಮ ಜಿಲ್ಲೆ ಅಥವಾ ಪ್ರದೇಶಕ್ಕೆ ಅನುಗುಣವಾಗಿ 25 ಅಥವಾ 45 ದಿನಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಬುಕ್ಕಿಂಗ್ ಮಾಡಬೇಕು. ಇದು ಅನಗತ್ಯ ಸಂಗ್ರಹ ಮತ್ತು ಕಾಳಸಂತೆಯನ್ನು ತಡೆಯುವಲ್ಲಿ ಸಹಾಯಕವಾಗುತ್ತದೆ. ತೈಲ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾ ಸಂಘರ್ಷ: ಮಾರ್ಚ್ 25 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ