Skip to main content
ವಿಡಿಯೋ
1/2
politics

ನೇಪಾಳದಲ್ಲಿ ಬಿಗುವಿನ ವಾತಾವರಣ: ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ..!

By Sushmitha R
ನೇಪಾಳದಲ್ಲಿ ಬಿಗುವಿನ ವಾತಾವರಣ: ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ..!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್‌ ಜಿ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಶನಿವಾರ ಬಂಧಿಸಲಾಗಿದೆ.

ನವದೆಹಲಿ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್‌ ಜಿ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಶನಿವಾರ ಬಂಧಿಸಲಾಗಿದೆ. ಬಾಲೇಂದ್ರ ಶಾ ಅವರು ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಈ ಬಂಧನ ನಡೆದಿದೆ.

ಓಲಿ ಅವರನ್ನು ನೇಪಾಳ ಪೊಲೀಸರು ಭಕ್ತಪುರದ ಗುಂಡು ಎಂಬಲ್ಲಿ ಇರುವ ಅವರ ನಿವಾಸದಿಂದ ವಶಪಡಿಸಿಕೊಂಡರು. ಓಲಿ ಜೊತೆಗೆ ಅವರ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನೂ ಬಂಧಿಸಲಾಗಿದೆ. ಲೇಖಕ್ ಅವರನ್ನು ಭಕ್ತಪುರದ ಸೂರ್ಯಬಿನಾಯಕ್ ಅಥವಾ ಕಟುಂಜೆ ಪ್ರದೇಶದಿಂದ ಬೆಳಿಗ್ಗೆ ಬಂಧಿಸಲಾಯಿತು.

ಪ್ರತಿಭಟನೆಯ ವೇಳೆ ಪೊಲೀಸ್ ಗುಂಡುಬಾರು ಮತ್ತು ಹಿಂಸಾಚಾರದಲ್ಲಿ ಕನಿಷ್ಠ 19 ಜನ ಯುವಕರು ಸಾವಿಗೀಡಾದರು ಎಂದು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಒಟ್ಟಾರೆಯಾಗಿ ಈ ಪ್ರತಿಭಟನೆಗಳಲ್ಲಿ ಸುಮಾರು 76 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತವೆ. Royal Enfield New Classis 350 Scale Model | 1: 12 | Rear-View Mirrors | Free Rolling Wheels | Steerable Handlebar | Working Rear Suspension and Side Stand | Commando Sand

ಇದು ಭ್ರಷ್ಟಾಚಾರ ವಿರೋಧಿ ಜನಾಂದೋಲನವಾಗಿ ಆರಂಭವಾಗಿ, ಓಲಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಕಠ್ಮಂಡು ಕಣಿವೆ ಪೊಲೀಸ್ ವಕ್ತಾರ ಓಂ ಅಧಿಕಾರಿ ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದಂತೆ, ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಯಿತು. ಪ್ರಕ್ರಿಯೆಯು ಕಾನೂನಿನ ಪ್ರಕಾರ ಮುಂದುವರಿಯುತ್ತದೆ.

ಈ ಬಂಧನಕ್ಕೆ ಗೌರಿ ಬಹಾದೂರ್ ಕಾರ್ಕಿ ನೇತೃತ್ವದ ತನಿಖಾ ಆಯೋಗದ ವರದಿಯು ಆಧಾರವಾಗಿದೆ. ಆಯೋಗವು ಓಲಿ ಅವರನ್ನು ಪ್ರತಿಭಟನೆಕಾರರ ಸಾವುಗಳನ್ನು ತಡೆಯಲು ಕ್ರಮ ಕೈಗೊಳ್ಳದೆ ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಿದೆ. ಇದು ದೋಷಾರೋಪಣೆಯ ಪ್ರಕರಣಕ್ಕೆ ಸಂಬಂಧಿಸಿದೆ.ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಭದ್ರತೆಗೆ ಟೀಮ್ ಇಂಡಿಯಾ ಸಿದ್ಧ..!

ಬಂಧನದ ಕೆಲವೇ ನಿಮಿಷಗಳ ನಂತರ ಹೊಸ ಗೃಹ ಸಚಿವ ಸುಡಾನ್ ಗುರುಂಗ್ ಅವರು ಪ್ರತಿಕ್ರಿಯಿಸಿದ್ದಾರೆ. ಯಾರೂ ಕಾನೂನಿಗಿಂತ ಮೇಲಲ್ಲ. ಇದು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಪ್ರಯತ್ನವಲ್ಲ ಇದು ನ್ಯಾಯದ ಆರಂಭ ಮಾತ್ರ.

ಈಗ ದೇಶವು ಹೊಸ ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂದು ನಂಬುತ್ತೇನೆ ಎಂದು ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಾಮಿಸ್ ಇಸ್ ಪ್ರಾಮಿಸ್ ಎಂದು ಅವರು ಹೇಳಿದ್ದಾರೆ.ಅಮೆರಿಕದ ಕರೆನ್ಸಿಯಲ್ಲಿ ಡೊನಾಲ್ಡ್ ಟ್ರಂಪ್ ಸಹಿ: 165 ವರ್ಷಗಳ ಸಂಪ್ರದಾಯಕ್ಕೆ ಅಂತ್ಯ!

ಓಲಿ ಅವರ ನಿವಾಸದ ಬಳಿ ಭದ್ರತಾ ಪಡೆಗಳು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಅವರ ಬೆಂಬಲಿಗರು ಪೊಲೀಸರೊಂದಿಗೆ ಸಣ್ಣ ಪ್ರಮಾಣದಲ್ಲಿ ಘರ್ಷಣೆ ನಡೆಸಿದರು ಎಂದು ವರದಿಗಳಿವೆ. ಬಂಧನದ ನಂತರ ಓಲಿ ಮತ್ತು ಲೇಖಕ್ ಅವರ ಆರೋಗ್ಯ ಪರೀಕ್ಷೆಯನ್ನು ಆರಂಭಿಸಲಾಗಿದೆ. ಅವರನ್ನು ಭದ್ರಕಾಲಿ ಜಿಲ್ಲಾ ಪೊಲೀಸ್ ಸಂಕೀರ್ಣಕ್ಕೆ ಕರೆದೊಯ್ಯಲಾಗಿದೆ.