Skip to main content
ವಿಡಿಯೋ
1/2
politics

ಇಸ್ರೇಲ್‌ನ ಕಠಿಣ ಮರಣದಂಡನೆ ಕಾನೂನು: ಭಾರತಕ್ಕೆ ಇದು ಪಾಠವೇ..?

By prasanna jodidar
ಇಸ್ರೇಲ್‌ನ ಕಠಿಣ ಮರಣದಂಡನೆ ಕಾನೂನು: ಭಾರತಕ್ಕೆ ಇದು ಪಾಠವೇ..?

ಭಯೋತ್ಪಾದಕರು ಜೀವಿಸುವುದು ಕಷ್ಟ ಇಸ್ರೇಲ್ ಹೊಸ ಕಾನೂನು ಸಂದೇಶ ಇದೇ! ತ್ವರಿತ ಗಲ್ಲು, ಕ್ಷಮಾದಾನವಿಲ್ಲ.

ತೆಲ್ ಅವಿವ್ :ಯಹೂದಿಗಳ ಸಾವಿಗೆ ಕಾರಣವಾಗುವ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ಮರಣದಂಡನೆ ಶಿಕ್ಷೆಯನ್ನು ಪುನರ್ಸ್ಥಾಪಿಸಿದೆ. ಇಸ್ರೇಲ್ ಇತಿಹಾಸದಲ್ಲಿ ಬದಲಾವಣೆ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಎರಡನೇ ಮಹಾಯುದ್ಧದ ನಂತರ ಇಸ್ರೇಲ್ ತನ್ನ ಇತಿಹಾಸದಲ್ಲಿ ಕೇವಲ ಒಂದು ಬಾರಿ ಮಾತ್ರ ಮರಣದಂಡನೆ ಶಿಕ್ಷೆಯನ್ನು ನೀಡಿದೆ.

1962ರಲ್ಲಿ ನಾಜಿ ಯುದ್ಧಾಪರಾಧಿ ಅಡಾಲ್ಫ್ ಐಚ್ಮನ್ ವಿರುದ್ಧ ಇಸ್ರೇಲಿ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದು ಈವರೆಗಿನ ಏಕೈಕ ಪ್ರಕರಣವಾಗಿತ್ತು.

ಕಡ್ಡಾಯ ಮರಣದಂಡನೆ: ಮಿಲಿಟರಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡುವ ಮತ್ತು ಮಾರಣಾಂತಿಕ ದಾಳಿ ನಡೆಸಿದ ಭಯೋತ್ಪಾದಕರಿಗೆ ಮರಣದಂಡನೆಯೇ ಮೊದಲ ಶಿಕ್ಷೆಯಾಗಿರುತ್ತದೆ.

ಒಂದು ವೇಳೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ನೀಡಬೇಕೆಂದರೆ, ಪ್ರಕರಣದಲ್ಲಿ ಅತ್ಯಂತ 'ವಿಶೇಷ ಸಂದರ್ಭಗಳು' ಇರುವುದನ್ನು ಸಾಬೀತುಪಡಿಸಬೇಕಾಗುತ್ತದೆ.

ರಾಷ್ಟ್ರದ ಅಸ್ತಿತ್ವಕ್ಕೆ ಧಕ್ಕೆ: ಇಸ್ರೇಲ್ ಅಸ್ತಿತ್ವವನ್ನು ಅಂತ್ಯಗೊಳಿಸುವ ಉದ್ದೇಶದಿಂದ ನಡೆಸುವ ಯಾವುದೇ ಕೃತ್ಯಗಳಿಗೆ ಇಸ್ರೇಲಿ ನಾಗರಿಕ ನ್ಯಾಯಾಲಯಗಳು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡಲಾಗಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes

90 ದಿನಗಳಲ್ಲಿ ಗಲ್ಲು: ತೀರ್ಪು ಪ್ರಕಟವಾದ 90 ದಿನಗಳೊಳಗೆ ನೇಣುಗಂಬಕ್ಕೇರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಕ್ಷಮದಾನಕ್ಕೆ ಅವಕಾಶವಿಲ್ಲ: ಶಾಸನವು ಭಯೋತ್ಪಾದನಾ ಕಾಯ್ದೆಯಡಿ ಶಿಕ್ಷೆಗೊಳಗಾದವರಿಗೆ ಕ್ಷಮಾದಾನ ಅಥವಾ ಶಿಕ್ಷೆ ಕಡಿತಗೊಳಿಸುವ ಹಕ್ಕನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.

ನ್ಯಾಯಾಧೀಶರ ತೀರ್ಮಾನ:

ಹಿಂದೆ ಮರಣದಂಡನೆಯಂತಹ ಕಠಿಣ ಶಿಕ್ಷೆ ನೀಡುವಾಗ ಹಲವು ಪೀಠಗಳು ಮತ್ತು ನ್ಯಾಯಾಧೀಶರ ಸಲಹೆ ಪಡೆಯಬೇಕಿತ್ತು. ಆದರೆ ಹೊಸ ಕಾನೂನಿನ ಪ್ರಕಾರ, ಮೂವರು ನ್ಯಾಯಾಧೀಶರ ಪೀಠವು ಸರ್ವಾನುಮತದಿಂದ ಮರಣದಂಡನೆಯನ್ನು ಘೋಷಿಸಬಹುದಾಗಿದೆ.ಬಿಜು ಪಟ್ನಾಯಕ್ ವಿರುದ್ಧ ಅಮಿತ್ ಶಾ ಆಪ್ತ ನಿಶಿಕಾಂತ್ ದುಬೆ ವಾಗ್ದಾಳಿ: ಸಿಐಎ ಏಜೆಂಟ್ ವಿವಾದ

ರಾಜಕೀಯ ಹಿನ್ನೆಲೆ:

ಹೊಸ ಕಾನೂನನ್ನು ಇಟಮಾರ್ ಬೆನ್-ಗವಿರ್ ನೇತೃತ್ವದ 'ಯಹೂದಿ ಪವರ್' ಪಕ್ಷವು ಪ್ರಬಲವಾಗಿ ಪ್ರತಿಪಾದಿಸಿತ್ತು. ಸಂಸತ್ತಿನಲ್ಲಿ ಕಾಯ್ದೆಯ ಪರವಾಗಿ 62 ಮತ್ತು ವಿರುದ್ಧವಾಗಿ 48 ಮತಗಳು ಬಿದ್ದವು.

ವಿರೋಧ ಪಕ್ಷಗಳು ಮತ್ತು ಅರಬ್ ಸಮುದಾಯದವರು ಇದನ್ನು "ಅನಾಗರಿಕ ಮತ್ತು ತಾರತಮ್ಯದ ಕಾನೂನು" ಎಂದು ಕರೆದಿದ್ದಾರೆ, ಅಲ್ಲದೆ ಇದು ಒಂದು ನಿರ್ದಿಷ್ಟ ಜನಾಂಗೀಯ ಗುಂಪನ್ನು ಗುರಿಯಾಗಿಸಿಕೊಂಡಿದೆ ಎಂದು ಆಪಾದಿಸಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಕೂಡ ಕಾನೂನನ್ನು ಖಂಡಿಸಿವೆ. ಭಾರತ-ಚೀನಾ ಸಂಬಂಧ: ಏಷ್ಯಾದ ಇಬ್ಬರು ದಿಗ್ಗಜರು ಒಂದೇ ಹಾದಿಯಲ್ಲಿದ್ದಾರೆಯೇ..?

ಭಾರತಕ್ಕೆ ಇದು ಚಿಂತನೆಯ ಸಮಯವೇ?

ಇಸ್ರೇಲ್ ಐತಿಹಾಸಿಕ ಬದಲಾವಣೆಯಿಂದ ಭಾರತೀಯ ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಯು ಕಲಿಯಬೇಕಾದದ್ದು ಬಹಳಷ್ಟಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಂತಹ ಕಠಿಣ ನಿರ್ಧಾರಗಳು ಮತ್ತು ತ್ವರಿತ ನ್ಯಾಯದ ಅಗತ್ಯವಿದೆಯೇ ಎಂಬ ಬಗ್ಗೆ ಭಾರತ ಪುನರ್ವಿಮರ್ಶೆ ನಡೆಸುವ ಸಮಯ ಬಂದಿದೆ.