Skip to main content
ವಿಡಿಯೋ
general

ಧರ್ಮಸ್ಥಳ ಪ್ರಕರಣ: ಯೋಜಿತ ಷಡ್ಯಂತ್ರದ ಸತ್ಯ ಬಯಲು ಎಕ್ಸ್‌ನಲ್ಲಿ ಅಧಿಕೃತವಾಗಿ ಬರೆದುಕೊಂಡ ಬಿಜೆಪಿ ನಾಯಕ ಸುನೀಲ್‌ ಕುಮಾರ್‌

By Pavitra Ganapathi Baradavalli
ಧರ್ಮಸ್ಥಳ ಪ್ರಕರಣ: ಯೋಜಿತ ಷಡ್ಯಂತ್ರದ ಸತ್ಯ ಬಯಲು ಎಕ್ಸ್‌ನಲ್ಲಿ ಅಧಿಕೃತವಾಗಿ ಬರೆದುಕೊಂಡ ಬಿಜೆಪಿ ನಾಯಕ ಸುನೀಲ್‌ ಕುಮಾರ್‌

ಧರ್ಮಸ್ಥಳದಲ್ಲಿ ನಡೆದಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕ್ಷಣಕ್ಷಣಕ್ಕೂ ಹೊಸ ಮಾಹಿತಿಗಳು ಬಯಲಾಗುತ್ತಿವೆ. ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಸುಜಾತಾ ಭಟ್ ತಾನು ಈವರೆಗೆ ಹೇಳಿದ್ದ ಅನನ್ಯಾ ಭಟ್ ಎಂಬ ತನ್ನ ಮಗಳ ಕಥೆಯೇ ಸುಳ್ಳು ಎಂದು ಒಪ್ಪಿಕೊಂಡಿರುವುದು ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕ್ಷಣಕ್ಷಣಕ್ಕೂ ಹೊಸ ಮಾಹಿತಿಗಳು ಬಯಲಾಗುತ್ತಿವೆ. ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಸುಜಾತಾ ಭಟ್ ತಾನು ಈವರೆಗೆ ಹೇಳಿದ್ದ ಅನನ್ಯಾ ಭಟ್ ಎಂಬ ತನ್ನ ಮಗಳ ಕಥೆಯೇ ಸುಳ್ಳು ಎಂದು ಒಪ್ಪಿಕೊಂಡಿರುವುದು ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಸ್ಫೋಟಕ ಹೇಳಿಕೆಯು ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಇದೊಂದು ಯೋಜಿತ ಷಡ್ಯಂತ್ರ ಎಂಬ ಆರೋಪಕ್ಕೆ ಬಲವಾದ ಆಧಾರವನ್ನು ಒದಗಿಸಿದೆ.ಇದನ್ನೂ ಓದಿ: 'ಅನನ್ಯಾ ಭಟ್ ನಮ್ಮ ಮಗಳು ಅಲ್ಲ'...ಇನ್‌ಸೈಟ್ ರಶ್ ವರದಿ ಮೂಲಕ ಸತ್ಯಾಸತ್ಯತೆ ಬಯಲು, ದೇಶದೆಲ್ಲೆಡೆ ಸಂಚಲನ..!

ಇನ್ಸೈಟ್‌ರಶ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಜಾತಾ ಭಟ್, ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ. ಇದೆಲ್ಲವೂ ಸುಳ್ಳು ಕಥೆಯಾಗಿತ್ತು, ಎಂದು ತಿಳಿಸಿದ್ದಾರೆ. ಈ ಹೇಳಿಕೆಯು ಆಸ್ತಿ ವಿವಾದದಿಂದ ಉಂಟಾದ ಒತ್ತಡದಿಂದಾಗಿ ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಟಿ. ಎಂಬವರ ಪ್ರಚೋದನೆಯಿಂದ ತಾನು ಈ ಸುಳ್ಳನ್ನು ಹೇಳಿದ್ದಾಗಿ ಆಕೆ ಒಪ್ಪಿಕೊಂಡಿದ್ದಾರೆ. ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳ ದೇವಸ್ಥಾನದವರು ತಮ್ಮ ಹೆಸರಿಗೆ ಒತ್ತಾಯವಾಗಿ ಬರೆದುಕೊಂಡಿದ್ದಾರೆ ಎಂಬ ಆರೋಪಕ್ಕಾಗಿ ಈ ಕಥೆಯನ್ನು ಕಟ್ಟಿದೆ. ಯಾರೂ ನನಗೆ ಹಣದ ಆಮಿಷ ಒಡ್ಡಿಲ್ಲ, ಆದರೆ ಆಸ್ತಿಯ ವಿಷಯವೇ ಇದಕ್ಕೆ ಕಾರಣ, ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸುಜಾತಾ ಭಟ್‌ರಿಂದ ಸುಳ್ಳು ಒಪ್ಪಿಗೆ: ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಆದರೆ ಮತ್ತೆ ಸುಜಾತ ಭಟ್‌ ಯೂಟರ್ನ್‌

ಆದರೆ, ಈ ತಪ್ಪೊಪ್ಪಿಗೆಯ ನಂತರ ಸುಜಾತಾ ಭಟ್ ಮತ್ತೊಂದು ಯೂಟರ್ನ್‌ ಹೊಡೆದಿದ್ದಾರೆ. ಕೆಲವು ನ್ಯೂಸ್‌ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ, ನನ್ನನ್ನು ಒತ್ತಾಯಪೂರ್ವಕವಾಗಿ ಈ ಹೇಳಿಕೆಗಳನ್ನು ನೀಡುವಂತೆ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್‌ನವರು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಸಿದ್ದಾರೆ, ಎಂದು ಆಕೆ ಆರೋಪಿಸಿದ್ದಾರೆ. ಈ ದ್ವಂದ್ವ ಹೇಳಿಕೆಗಳು ಪ್ರಕರಣದ ಸತ್ಯಾಸತ್ಯತೆಯನ್ನು ಇನ್ನಷ್ಟು ಗೊಂದಲಕ್ಕೀಡುಮಾಡಿವೆ.ಇದನ್ನೂ ಓದಿ: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: ಮಗಳು ನಾಪತ್ತೆ ಎಂದು ಹೇಳಿದ ಸುಜಾತಾ ಭಟ್‌ಗೆ SIT ನೋಟಿಸ್..!
 
ಧರ್ಮಸ್ಥಳದಲ್ಲಿ ಗುಂಡಿಗಳಲ್ಲಿ ಶವಗಳನ್ನು ಹೂತಾದ ಆರೋಪಗಳನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗ ಸುಜಾತಾ ಭಟ್‌ಗೆ ನೋಟಿಸ್ ಜಾರಿಗೊಳಿಸಿದೆ. ಆಕೆಯನ್ನು ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸುಜಾತಾ ಭಟ್ ತಾನು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಐಟಿ ತನಿಖೆಯು ಶಿವಮೊಗ್ಗ, ಬೆಂಗಳೂರು ಮತ್ತು ಉಡುಪಿಗೆ ವಿಸ್ತರಿಸಿದ್ದು, ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.


ಸುಜಾತಾ ಭಟ್‌ರ ಈ ಹೇಳಿಕೆಯು ಧರ್ಮಸ್ಥಳದ ಭಕ್ತರಲ್ಲಿ ಆಘಾತವನ್ನುಂಟುಮಾಡಿದೆ. ಆಕೆಯ ಆರಂಭಿಕ ಆರೋಪಗಳು ದೇವಾಲಯದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದವು. ಆದರೆ, ಈಗ ಆಕೆಯ ತಪ್ಪೊಪ್ಪಿಗೆಯಿಂದ ಈ ಆರೋಪಗಳು ಯೋಜಿತ ಷಡ್ಯಂತ್ರದ ಭಾಗವಾಗಿರಬಹುದು ಎಂಬ ಶಂಕೆಗೆ ಬಲ ಒದಗಿದೆ. ಕರ್ನಾಟಕದ ಜನತೆ ಮತ್ತು ಧರ್ಮಸ್ಥಳದ ಭಕ್ತರಿಗೆ ಕ್ಷಮೆ ಕೇಳುತ್ತೇನೆ, ಎಂದು ಸುಜಾತಾ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ಹೇಳಿದ್ದು ಸುಳ್ಳು - ತಪ್ಪು ಒಪ್ಪಿಕೊಂಡ - ಸುಜಾತ ಭಟ್ INSIGHTRUSH MEGA EXCLUSIVE ... | Sujatha Bhat​ |


ಈ ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಎಸ್‌ಐಟಿ ತೀವ್ರಗೊಂಡ ತನಿಖೆಯನ್ನು ಮುಂದುವರೆಸಿದೆ. ಸುಜಾತಾ ಭಟ್‌ರ ದ್ವಂದ್ವ ಹೇಳಿಕೆಗಳು ಮತ್ತು ಆಕೆಯ ಆರೋಪಗಳ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತಂಡವು ಶಿವಮೊಗ್ಗ, ಬೆಂಗಳೂರು ಮತ್ತು ಉಡುಪಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಈ ಘಟನೆಯು ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಮೇಲೆ ಆರೋಪಗಳನ್ನು ಮಾಡುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮಹತ್ವವನ್ನು ಎತ್ತಿ ತೋರಿಸಿದೆ.

ಈ ಸುದ್ದಿ ಕುರಿತಂತೆ ಇನ್ಸೈಟ್‌ರಶ್‌ ವರದಿ ಮಾಡಿತ್ತು ಈ ವರದಿಗೆ ಸಂಬಂಧಿಸಿದಂತೆ ಸುನೀಲ್‌ ಕುಮಾರ್‌ ಕಾರ್ಕಳ ಅವರು ತಮ್ಮ ಎಕ್ಸ್‌ನಲ್ಲಿ ಧರ್ಮಸ್ಥಳ ಪ್ರಕರಣ ಒಂದು ಯೋಜಿತ ಷಡ್ಯಂತ್ರ ಎಂಬುದಕ್ಕೆ ಕ್ಷಣ ಕ್ಷಣಕ್ಕೂ ಮಾಹಿತಿ ಲಭಿಸುತ್ತಿದೆ. ಅನನ್ಯಾ ಭಟ್ ತನ್ನ ಮಗಳೇ ಅಲ್ಲ ಎಂದು ಈ ಪ್ರಕರಣದ ಕೇಂದ್ರ ಬಿಂದು ಸುಜಾತ ಭಟ್ ಇಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ ಎಂದು ಬರೆದುಕೊಂಡಿದ್ದಾರೆ.