ಗುಜಾರಾತ್ನ ಕಾಂಡ್ಲಾದಿಂದ ಹೊರಟ ಸ್ಪೈಸ್ ಜೆಟ್ Q400 ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ಸಂದರ್ಭದಲ್ಲಿ ಇಂದು ತುರ್ತು ಭೂ ಸ್ಪರ್ಶ ಮಾಡಿದೆ.
ವಿಮಾನದ ಹೊರ ಚಕ್ರವು ಟೇಕ್ ಆಫ್ ಆಗುವ ಸಂದರ್ಭದಲ್ಲಿ ರನ್ವೇ ಮೇಲೆ ಬಿದ್ದ ಕಾರಣ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದು, ಯಾವುದೇ ಅನಾಹುತಗಳಾಗಿಲ್ಲ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ ಎನ್ನಲಾಗಿದೆ.
75 ಜನ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನವು ಕಾಂಡ್ಲಾ ವಿಮಾನ ನಿಲ್ದಾಣದಿಂದ ಹೊರಟು ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಆರಂಭಿಕ ಹಂತದ ರನ್ವೇ ಸಮಯದಲ್ಲಿ ವಿಮಾನದ ಹೊರಚಕ್ರವು ಪತ್ತೆಯಾಗಿದೆ.
Narendra Modi: A Global Transformative Leader Hardcover – 26 September 2024
ಆನಂತರ, ಮುಂಬೈವರೆಗೂ ಸಂಚರಿಸಿ, ಸುಗಮವಾದ ಲ್ಯಾಂಡಿಂಗ್ ಮಾಡಿ ಟರ್ಮಿನಲ್ ನಲ್ಲಿ ನಿಲ್ಲಿಸಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆಂದು ತಿಳಿಸಲಾಗಿದೆ. ಇದರಿಂದಾಗಿ ಇಂದು ಸಂಜೆ 5 ಗಂಟೆವರೆಗೆ ಮುಂಬೈನ ಎಲ್ಲಾ ಡಿಪಾರ್ಚರ್ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು: ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರಿಕೆ..!