ಬೆಂಗಳೂರು: ನಿನ್ನೆಯ ಸಭೆಯಲ್ಲಿ ಯಾವುದೇ ಗೊಂದಲ ಇಲ್ಲ, ಯಾವುದೇ ಭಿನ್ನಾಭಿಪ್ರಾಯ ಸಹ ಇಲ್ಲ ನಿನ್ನೆ ನಡೆದ ಸಭೆಯಲ್ಲೂ ಸಹ ಯಾವುದೇ ಆಕ್ಷೇಪಣೆಗಳು ಸಹ ಎದ್ದಿಲ್ಲ ಎಲ್ಲಾ ಸರಿಯಾಗೇ ಇದೆ ಎಂದು ಸಂತೋಷ್ ಲಾಡ್ ಹೇಳಿಕೆ ಕೊಟ್ಟಿದ್ದಾರೆ. ಹಾಗೇ ನಾವು ಕಾಂತರಾಜು ವರದಿಯನ್ನು ತಿರಸ್ಕಾರ ಮಾಡಲು ಆಗಲ್ಲ. ನಮ್ಮ ಮುಂದೆ ಕಾಂತರಾಜು ವರದಿ ಸಹ ಇದೆ.ಇದನ್ನೂ ಓದಿ: ಜಾತಿ ಗಣತಿ ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಹೈ ಕೋರ್ಟ್ಗೆ ಅರ್ಜಿ ಸಲ್ಲಿಕೆ..!!!
ಇವತ್ತು ಸಿಎಂ ಜೊತೆ ಸಭೆ ಇದೆ ಆ ಸಭೆಯಲ್ಲಿ ಚರ್ಚೆ ಮಾಡಿ ಕೊನೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲಾ ಸಮುದಾಯದಲ್ಲೂ ಬಡವರು ಇದ್ದಾರೆ. ಯಾಯ್ಯಾರು ಬಡವರು ಇದಾರೆ ಅನ್ನೋದು ಗೊತ್ತಾಗಬೇಕಿದೆ. ಹಾಗಾಗಿ ಶೈಕ್ಷಣಿಕ ಆರ್ಥಿಕ ಮಾನದಂಡಗಳ ಆಧಾರವಾಗಿ ಇಟ್ಟುಕೊಂಡು ಈ ಜಾತಿ ಸಮೀಕ್ಷೆಯನ್ನು ನಡೆಸುವ ಅನಿವಾರ್ಯತೆ ಇದೆ ಎಂದು ಬೆಂಗಳೂರಿನಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: ಬೈಯಪ್ಪನಹಳ್ಳಿ ಬಳಿ ಕ್ಯಾಬ್ ಡ್ರೈವರ್ ಮೇಲೆ ಯುವಕರ ತಂಡ ಹಲ್ಲೆ...
ಯಾವ ಸಮುದಾಯದಲ್ಲಿ ಬಡವರು ಇದಾರೆ ಯಾವ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಯಾವ ಸಮುದಾಯಕ್ಕೆ ಇನ್ನೂ ಆರ್ಥಿಕ ಸಹಾಯ ಬೇಕು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಈ ಜಾತಿ ಸಮೀಕ್ಷೆ ಅನಿವಾರ್ಯವಾಗಿದೆ ಎಂದು ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ. ಜಾತಿ ಗಣತಿಯನ್ನು ಸರ್ಕಾರ ಏಕೆ ನಡೆಸಲೇ ಬೇಕು ಅಂತ ಪಟ್ಟು ಹಿಡಿದಿದೆ ಅದರ ಹಿಂದಿನ ಉದ್ಧೇಶ ಏನು ಎಂಬುದು ಎಲ್ಲರಿಗೂ ತಿಳಿಯಬೇಕು ಎಂದರು..C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)