Skip to main content
ವಿಡಿಯೋ
1/2
politics

ಪಾಕ್‌ ಗೆ ಭಯೋತ್ಪಾದನೆ ನಿಲ್ಲಿಸಿ, ಇಲ್ಲ ಭೂಪಟದಲ್ಲಿ ಉಳಿಯಲು ಆಗಲ್ಲ: ಜನರಲ್ ದ್ವಿವೇದಿಯ ಧಮಕಿ..!

By Sushmitha R
ಪಾಕ್‌ ಗೆ ಭಯೋತ್ಪಾದನೆ ನಿಲ್ಲಿಸಿ, ಇಲ್ಲ ಭೂಪಟದಲ್ಲಿ ಉಳಿಯಲು ಆಗಲ್ಲ: ಜನರಲ್ ದ್ವಿವೇದಿಯ ಧಮಕಿ..!

ಜೈಪುರ ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಕಟುವಾದ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್ ಗಡ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ, ಭಾರತೀಯ ಸೇನೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ ಎಂದು ಘೋಷಿಸಿದರು.

ಜೈಪುರ: ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಕಟುವಾದ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್ ಗಡ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ, ಭಾರತೀಯ ಸೇನೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ ಎಂದು ಘೋಷಿಸಿದರು. ಇದನ್ನು ಓದಿ:ಆಪರೇಷನ್ ಸಿಂದೂರ್‌ನಲ್ಲಿ ಐಎಎಫ್‌ನ ಶಕ್ತಿ: ಎಪಿ ಸಿಂಗ್‌ನ ಭಾವುಕ ಹೇಳಿಕೆ..!

ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ತೋರಿದ ಸಂಯಮ ಮುಂದೆ ಪುನರಾವರ್ತನೆಯಾಗದು ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ಆಪರೇಷನ್ ಸಿಂಧೂರ್ ಮೂಲಕ ಭಾರತವು ವಿಶ್ವಕ್ಕೆ ತೆರೆದಿಟ್ಟಿದೆ. ಪಹಲ್ಗಾಮ್ ದಾಳಿಯ ನಂತರ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಯಶಸ್ವಿಯಾಗಿ ದಾಳಿ ನಡೆಸಿತು.TCL 164 cm (65 inches) 4K UHD Smart QD-Mini LED Google TV 65Q6C

ಈ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಸಮುದಾಯವೂ ಬೆಂಬಲ ವ್ಯಕ್ತಪಡಿಸಿತು. ಜನರಲ್ ದ್ವಿವೇದಿ, ಭಾರತವು ಮುಂದಿನ ಯಾವುದೇ ಸಂಘರ್ಷಕ್ಕೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಹೇಳಿದರು. ಮುಂದಿನ ಬಾರಿ ಕರುಣೆ ಇರುವುದಿಲ್ಲ ಭಾರತೀಯ ಸೇನೆಯ ಉತ್ತರವು ಪಾಕಿಸ್ತಾನಕ್ಕೆ ಭೂಪಟದಿಂದಲೇ ಕಠಿಣವಾಗಿರಲಿದೆ, ಎಂದು ಅವರು ಎಚ್ಚರಿಸಿದರು. ಇದನ್ನು ಓದಿ; ಬೆಡ್‌ರೂಂನಲ್ಲಿ ಸೀಕ್ರೇಟ್‌ ಕ್ಯಾಮರಾ, ಪತ್ನಿ ಜೊತೆಗಿನ ಖಾಸಗಿ ವಿಡಿಯೋವನ್ನ ಸ್ನೇಹಿತರಿಗೆ ಕಳುಹಿಸಿತ್ತಿದ್ದ ಪಾಪಿ ಪತಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌…!!

ಗಡಿಯಲ್ಲಿ ವಾಸಿಸುವ ಜನರ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಗಡಿಯ ಜನರು ಸಾಮಾನ್ಯರಲ್ಲ, ಸೈನಿಕರಂತೆಯೇ ಅವರು ಯಾವಾಗಲೂ ಸೇನೆಯ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ, ಎಂದರು.

ಮುಂಬರುವ ಯಾವುದೇ ಸಂಘರ್ಷವು ಕೇವಲ ಸೇನೆಯದ್ದಲ್ಲ, ಇಡೀ ರಾಷ್ಟ್ರದ ಸಂಘರ್ಷವಾಗಿರಲಿದೆ ಎಂದು ಅವರು ಗುಡುಗಿದರು. ಸೈನಿಕರಿಗೆ ಈಗಿನಿಂದಲೇ ಸಜ್ಜಾಗಿರಲು ಸೂಚಿಸಿದ ಅವರು, ದೇವರ ಕೃಪೆಯಿಂದ ಅವಕಾಶ ಶೀಘ್ರದಲ್ಲೇ ಬರಬಹುದು, ಎಂದು ಹೇಳಿದರು. ಈ ಎಚ್ಚರಿಕೆಯು ಭಾರತದ ರಾಷ್ಟ್ರೀಯ ಭದ್ರತೆಯ ಬದ್ಧತೆಯನ್ನು ಮತ್ತಷ್ಟು ಹೇಳಿದೆ.ಇದನ್ನು ಓದಿ:ಕರೂರು ಕಾಲ್ತುಳಿತ ಪ್ರಕರಣ - ಟಿವಿಕೆ ಪಕ್ಷದಿಂದ ಸಿಬಿಐ ತನಿಖೆಗೆ ಆಗ್ರಹಿಸಿದ ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌.!