Skip to main content
ವಿಡಿಯೋ
1/3
crime

ಮೆಟ್ರೋ ಸಿಬ್ಬಂದಿ ಮೇಲೆ ಚಾಕು ಇರಿತಕ್ಕೆ ಯತ್ನ: ಪೆಟ್ರೋಲ್ ಕಳ್ಳನ ಕೃತ್ಯ..!!

By Pavitra Ganapathi Baradavalli
ಮೆಟ್ರೋ ಸಿಬ್ಬಂದಿ ಮೇಲೆ ಚಾಕು ಇರಿತಕ್ಕೆ ಯತ್ನ: ಪೆಟ್ರೋಲ್ ಕಳ್ಳನ ಕೃತ್ಯ..!!

ಶ್ರೀರಾಮಪುರ ಮೆಟ್ರೋ ನಿಲ್ದಾಣದ ಬಳಿ ಪೆಟ್ರೋಲ್ ಕದಿಯುತ್ತಿದ್ದ ಯುವಕನನ್ನು ಪ್ರಶ್ನಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಮತ್ತು ಇಬ್ಬರು ಮೆಟ್ರೋ ಸಿಬ್ಬಂದಿಯ ಮೇಲೆ ಚಾಕು ಇರಿಯಲು ಯತ್ನಿಸಿದ ಘಟನೆ ನಡೆದಿದೆ

ಬೆಂಗಳೂರು: ಶ್ರೀರಾಮಪುರ ಮೆಟ್ರೋ ನಿಲ್ದಾಣದ ಬಳಿ ಪೆಟ್ರೋಲ್ ಕದಿಯುತ್ತಿದ್ದ ಯುವಕನನ್ನು ಪ್ರಶ್ನಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಮತ್ತು ಇಬ್ಬರು ಮೆಟ್ರೋ ಸಿಬ್ಬಂದಿಯ ಮೇಲೆ ಚಾಕು ಇರಿಯಲು ಯತ್ನಿಸಿದ ಘಟನೆ ನಡೆದಿದೆ.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

ವಿನಾಯಕ್ ಎಂಬಾತ ಕೃತ್ಯ ಎಸಗಿದ್ದಾನೆ. ಮೊನ್ನೆ ಬೆಳಗಿನ ಜಾವ ಪೆಟ್ರೋಲ್ ಕದಿಯಲು ಯತ್ನಿಸುತ್ತಿದ್ದ ವಿನಾಯಕನನ್ನು ಭದ್ರತಾ ಸಿಬ್ಬಂದಿ ಗಿರೀಶ್ ಹಾಗೂ ಇಬ್ಬರು ಮೆಟ್ರೋ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ವೇಳೆ ಮಾತುಕತೆ ವಾಗ್ವಾದಕ್ಕೆ ತಿರುಗಿ, ಕೋಪಗೊಂಡ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.ಇದನ್ನೂ ಓದಿ: ರಷ್ಯಾ-ಅಮೆರಿಕ-ಉಕ್ರೇನ್: ರಾಜತಾಂತ್ರಿಕ ಪರಿಹಾರ ಹತ್ತಿರದಲ್ಲಿದೆ ಎಂದ ರಷ್ಯಾದ ಪ್ರತಿನಿಧಿ!

ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಿರೀಶ್ ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಮೆಟ್ರೋ ಸಿಬ್ಬಂದಿ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶ್ರೀರಾಮಪುರ ಪೊಲೀಸರು ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು, ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಹಿಜಾಬ್‌ ಪ್ರಕರಣ: ಶಾಲೆಯಲ್ಲಿ ಹಿಜಾಬ್‌ ನಿಷೇಧ, ಕೇರಳದ ಪ್ರಕರಣ ಅಂತ್ಯವಾಗಿದ್ದು ಹೇಗೆ?

ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಟ್ರೋ ನಿಲ್ದಾಣದ ಸಮೀಪ ನಡೆದ ಕೃತ್ಯದಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.INDO ERA Women's Straight Linen Floral Printed Kurta & Pant with Dupatta Set (IEOUT10562)