ರಾಜ್ಯದ ಸಾಂಸ್ಕೃತಿಕ ಮಹತ್ವಕ್ಕೆ ಪೂರಕವಾಗಿ ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆಯಡಿಯಲ್ಲಿ ಬರುವ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ರೈಲು ನಿಲ್ದಾಣಗಳ ಹೆಸರು ಬದಲಾವಣೆಯ ಕುರಿತಾಗಿ ಪತ್ರ ಬರೆಯಲಾಗಿದೆ. ಈ ಶಿಫಾರಸ್ಸನ್ನು ಅಂಗೀಕರಿಸಿ, ಮರುನಾಮಕರಣದ ಸಂಗತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಕೇಂದ್ರಕ್ಕೆ ಸಚಿವರು ಕೋರಿದ್ದಾರೆ.
ಸ್ಥಳೀಯ ಸಂಸ್ಕೃತಿಯ ಪ್ರತಿಬಿಂಬವಾಗಿ ಕರ್ನಾಟಕದ ನಾಲ್ಕು ರೈಲು ನಿಲ್ದಾಣಗಳ ಹೆಸರುಗಳನ್ನು ಸಂತರ ಹೆಸರಿನಲ್ಲಿ ಬದಲಾಯಿಸುವ ಉದ್ದೇಶದಿಂದ, ಇದಕ್ಕೆ ಸಂಬಂಧಿಸಿದ ಪತ್ರವನ್ನು ಕಳುಹಿಸಿರುವ ಮೂಲಕ ರಾಜ್ಯ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ. iQOO Neo 10R 5G (Moonknight Titanium, 8GB RAM, 256GB Storage) | Snapdragon 8s Gen 3 Processor | India's Slimmest 6400mAh Battery Smartphone | Segment's Most Stable 90FPS for 5 Hours
ಈ ಪತ್ರದಲ್ಲಿ, ವಿಜಯಪುರ ನಿಲ್ದಾಣವನ್ನು "ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲ್ವೇ ನಿಲ್ದಾಣ" ಎಂದು, ಬೆಳಗಾವಿ ನಿಲ್ದಾಣವನ್ನು "ಶ್ರೀ ಬಸವ ಮಹಾಸ್ವಾಮೀಜಿ" ಹೆಸರಿನಲ್ಲಿ, ಬೀದರ್ ನಿಲ್ದಾಣವನ್ನು "ಚನ್ನಬಸವ ಪಟ್ಟದದೇವರು" ಹೆಸರಿನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ನಿಲ್ದಾಣವನ್ನು "ಭಾಯಗಡ ರೈಲ್ವೇ ನಿಲ್ದಾಣ" ಎಂದು ಬದಲಾಯಿಸುವಂತೆ ಕೋರಲಾಗಿದೆ. ಇದನ್ನೂ ಓದಿ: ಪೆಟ್ರೋಲ್ ಬೆಲೆ ದುಬಾರಿ - ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಿದ ಸರ್ಕಾರ - ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ!