ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್ಗಳು ಒಂದಾದ ಮೇಲೊಂದು ನಡೆಯುತ್ತಿವೆ. ಇತ್ತೀಚೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಗೆ ಬಂದ ರಜತ್ ಮತ್ತು ಚೈತ್ರಾ ಈಗ ಮತ್ತೆ ಚರ್ಚೆಯ ಕೇಂದ್ರವಾಗಿದ್ದಾರೆ. ಇವರನ್ನು ಈ ವಾರವೇ ಮನೆಯಿಂದ ಹೊರ ಕಳುಹಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.ಕಳೆದ ವಾರ ಹಿಂದಿನ ಸೀಸನ್ನ ಐದು ಸ್ಪರ್ಧಿಗಳನ್ನು ವಿಶೇಷವಾಗಿ ಕರೆಸಲಾಗಿದ್ದು, ಅವರ ಪೈಕಿ ರಜತ್ ಮತ್ತು ಚೈತ್ರಾ ಅವರನ್ನು ಮಾತ್ರ ವೈಲ್ಡ್ ಕಾರ್ಡ್ ಆಗಿ ಉಳಿಸಿಕೊಳ್ಳಲಾಯಿತು. 58ನೇ ದಿನ ದೊಡ್ಮನೆಗೆ ಎಂಟ್ರಿ ಕೊಟ್ಟ ಇವರಿಬ್ಬರೂ ಮೊದಲ ವಾರದಲ್ಲೇ ಸಾಕಷ್ಟು ಗಣೇಶ ತಂದಿದ